Friday, January 10, 2014

Sexual harrasement

ದೇರಳಕಟ್ಟೆ ಮಾದರಿಯ ಮತ್ಹೊಂದು ಗಟನೆ: ಸೆಕ್ಸ್ ಆ್ಯಂಡ್ ಬ್ಲ್ಯಾಕ್ಮೇಲ್
ಅಮಲು ಪದಾರ್ಥ ನೀಡಿ ಕೆಡಿಸಿದ ನಕಲಿ ಪ್ರೇಮಿ ಉಡುಪಿ: ದೇರಳಕಟ್ಟೆಯ ಪ್ರಕರಣ ಕಾವೇರುತ್ತಿರುವಾಗಲೇ, ಇದೀಗ ಅದೇ ಮಾದರಿಯಲ್ಲಿ ಭಿನ್ನ ಕೋಮಿನ ಪಾಖಂಡಿ ಕಾಮುಕ ಯುವಕನೋರ್ವ ವಿದ್ಯಾರ್ಥಿನಿ ಯನ್ನು ಪುಸಲಾಯಿಸಿ ಆಕೆಯೊಂದಿಗೆ ನಡೆಸಿದ ಸೆಕ್ಸ್ನ ಚಿತ್ರಗಳನ್ನಿಟ್ಟು ಲಕ್ಷಾಂತರ ರೂ. ಹಣ ಪಡೆದಿರುವು ದಲ್ಲದೆ ಮತ್ತೆ ಹಣದ ಬೇಡಿಕೆ ಮುಂದಿರಿಸಿ ಹಣ ಕೊಡದೇ ಇದ್ದಾಗ ಫೇಸ್ಬುಕ್ನಲ್ಲಿ ಚಿತ್ರವನ್ನು ಪ್ರಕಟಿಸಿ ದ್ದಾನೆ. ಇದರಿಂದ ಉಡುಪಿಯಲ್ಲಿ ಉದ್ರಿಕ್ತ ಸ್ಥಿತಿ ನಿರ್ಮಾಣಗೊಂಡು ಬಜರಂಗದಳದ ಕಾರ್ಯಕರ್ತರು ನಿನ್ನೆ ಸಂಜೆಯಿಂದಲೇ ಉಡುಪಿ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಮುಂದೆ ಜಮಾಯಿಸಿ ಆರೋಪಿ
ಯನ್ನು ಕೂಡಲೇ ಬಂಧಿಸುವಂತೆ ಒತ್ತಾಯಿಸಿದ್ದಾರೆ.
ಕಟಪಾಡಿ ನಿವಾಸಿ ಮುಹಮ್ಮದ್ ಯಾಸೀರ್ ವಿದ್ಯಾರ್ಥಿನಿಯ ಜೀವನದಲ್ಲಿ ಚೆಲ್ಲಾಟವಾಡಿದ ಪಾಖಂಡಿ ಯುವಕ. ಉಡು ಪಿಯ ಪ್ರತಿಷ್ಠಿತ ಕಾಲೇಜಿನ ವಿದ್ಯಾರ್ಥಿನಿ ಜತೆಗೆ ಸ್ನೇಹ ಬೆಳೆಸಿದ್ದ ಯಾಸೀರ್, ಪ್ರೀತಿಯ ನಾಟಕವಾಡಿದ್ದಾನೆ. ಬಳಿಕ ಆಕೆಯನ್ನು ನಂಬಿಸಿ ಜ್ಯೂಸ್ ಕುಡಿಯಲೆಂದು ಕರೆದೊಯ್ದಾತ ಅದರಲ್ಲಿ ಅಮಲು ಪದಾರ್ಥ ಸೇರಿಸಿ ವಿದ್ಯಾರ್ಥಿನಿಗೆ ಕುಡಿಸಿದ್ದ. ಬಳಿಕ ವಿದ್ಯಾರ್ಥಿನಿ ಜತೆ ತನ್ನ ತೃಷೆ ತೀರಿಸಲು ಆರಂಭಿಸಿದ ಯಾಸೀರ್ ಬೇಕಾದ ಹಾಗೆ ಚಿತ್ರಗಳನ್ನು ತೆಗೆದಿದ್ದ. ವಿದ್ಯಾರ್ಥಿನಿಯ ನಶೆ ಇಳಿದಾಗ ನಡೆಯ ಬಾರದ ಘಟನೆ ನಡೆದಿತ್ತು. ಅಸಹಾಯಕ ವಿದ್ಯಾರ್ಥಿನಿಯಲ್ಲಿ ತಾನು ತೆಗೆದಿರುವ ಚಿತ್ರಗಳನ್ನು ತೋರಿಸಿ ಸಾಮಾಜಿಕ ತಾಣಗಳಲ್ಲಿ ಪ್ರಕಟಿಸುವ ಬೆದರಿಕೆಯೊಡ್ಡಿ ಮೂರು ಲಕ್ಷ ರೂ. ಹಣ ನೀಡುವಂತೆ ಬ್ಲ್ಯಾಕ್ಮೇಲ್ ನಡೆಸಲು ಆರಂಭಿಸಿದ್ದನು. ಗಾಬರಿಗೊಂಡ ವಿದ್ಯಾರ್ಥಿನಿ ಮಾನ ಹರಾಜಾಗುವ ಮುನ್ನ ಹಣ ನೀಡ ಬೇಕೆಂದು ನಡೆದ ವಿಚಾರವನ್ನು ಮ£ Éಮಂದಿಯಲ್ಲಿ ತಿಳಿಸಿದ್ದಳು. ಇದರಿಂದ ಒಮ್ಮೆಲೆ ದಿಗಿಲು ಬಡಿದಂತಾದ ಮನೆ ಮಂದಿ, ಮೂರು ಲಕ್ಷ ರೂ. ಹಣವನ್ನು ಸಾಲ-ಶೂಲ ಮಾಡಿ ಹೊಂದಿಸಿ ಮುಹಮ್ಮದ್ ಯಾಸೀರ್ನಿಗೆ ನೀಡಿದ್ದರು. ಆದರೆ ಪ್ರಕರಣ ಅಷ್ಟಕ್ಕೇ ಮುಗಿಯುವು ದೆಂಬ ನಂಬಿಕೆಯಲ್ಲಿದ್ದ ಮನೆಮಂದಿಗೆ ಮತ್ತೊಮ್ಮೆ ತೊಂದರೆ ನೀಡಲು ಆರಂಭಿ ಸಿದ ಯಾಸೀರ್ ಮತ್ತೆ ಹತ್ತು ಲಕ್ಷ ರೂ. ಹಣದ ಬೇಡಿಕೆ ಮುಂದಿರಿಸಿದ್ದ. ಆದರೆ ಅಷ್ಟೊಂದು ಹಣ ಹೊಂದಾಣಿಕೆ ಮಾಡಲು ಮನೆಮಂದಿಗೆ ಸಾಧ್ಯವಾಗದೆ, ಚಿತ್ರಗಳನ್ನು ವಾಪಸ್ ನೀಡುವಂತೆ ಪರಿ ಪರಿಯಾಗಿ ಬೇಡಿಕೊಂಡಿದ್ದರು. ಆದರೆ ಬ್ಲ್ಯಾಕ್ಮೇಲ್ ಮುಂದುವರಿಸಿದ ಯಾಸೀರ್, ಚಿತ್ರಗಳನ್ನು ತನ್ನ ಫೇಸ್ಬುಕ್ ಖಾತೆಯಲ್ಲಿ ಅಪ್ಲೋಡ್ ಮಾಡಿ ವಿದ್ಯಾರ್ಥಿನಿಯ ಮಾನ ಹರಾಜು ಮಾಡಿದ್ದಾನೆ. ವಿಷಯ ಬಜರಂಗಳದ ಕಾರ್ಯಕರ್ತರ ಗಮನಕ್ಕೆ ಬಂದೊಡನೆಯೇ ಉಡುಪಿ ಎಸ್.ಪಿ. ಕಚೇರಿ ಮುಂದೆ ಜಮಾಯಿಸಿದ
ನೂರಾರು ಕಾರ್ಯಕರ್ತರು ಯಾಸೀರ್ನನ್ನು ಕೂಡಲೇ ಬಂಧಿಸುವಂತೆ ಒತ್ತಾಯಿಸಿದ್ದಾರೆ.
ಅವಳಿ ಜಿಲ್ಲೆಗಳಲ್ಲಿ ಸಕ್ರಿಯವಾಗಿರುವ ಜಾಲ ದೇರಳಕಟ್ಟೆಯಲ್ಲಿ ವಿದ್ಯಾರ್ಥಿ-ವಿದ್ಯಾರ್ಥಿನಿಯ ಅಶ್ಲೀಲ ಚಿತ್ರ ತೆಗೆದು ಲಕ್ಷಾಂತರ ರೂ. ಹಣಕ್ಕಾಗಿ ಬೇಡಿಕೆ ಇರಿಸಿ ಸಿಕ್ಕಿಬಿದ್ದಿರುವ ಎಂಟು ಮಂದಿಯ ಬಗ್ಗೆ ಬಿಸಿಬಿಸಿ ಚರ್ಚೆ ನಡೆದು, ಪ್ರಕರಣ ದ.ಕ.ಜಿಲ್ಲೆಯನ್ನೇ ತಲ್ಲಣಗೊಳಿಸಿದ ನಡುವೆಯೇ ಹುಂಬ ಧೈರ್ಯದಲ್ಲಿ ಮಹಮ್ಮದ್ ಯಾಸೀರ್ ವಿದ್ಯಾರ್ಥಿನಿಯನ್ ನು ಬ್ಲ್ಯಾಕ್ಮೇಲ್ ಮಾಡಿರುವುದು ನೋಡಿದರೆ ಈತನ ಹಿಂದೆ ಬೆಂಗಾವಲಾಗಿ ಹಲವಾರು ಮಂದಿ ಪ್ರಭಾವಿಗಳಿದ್ದು, ಅವಳಿ ಜಿಲ್ಲೆಗಳಲ್ಲಿ ಹಿಂದು ಹುಡುಗಿಯರನ್ನು ಟಾರ್ಗೆಟ್ ಮಾಡಿ ಇಂತಹ ದುಷ್ಕøತ್ಯಗಳನ್ನು ನಡೆಸಲು ಬೃಹತ್ ಜಾಲವೇ ಇದೆ ಎಂದು ಬಜರಂಗದಳ ಆರೋಪಿಸಿದೆ. ಕಾಮಿಯ ಸುಳಿವಿಲ್ಲ, ಫೇಸ್ಬುಕ್ನಲ್ಲಿ ಚಿತ್ರವಿಲ್ಲ! ವಿದ್ಯಾರ್ಥಿನಿಯ ಚಿತ್ರಗಳನ್ನು ತನ್ನ ಫೇಸ್ಬುಕ್ ಅಕೌಂಟಿನಲ್ಲಿ ಹಾಕುತ್ತಿದ್ದಂತೆ, ಪ್ರಕರಣ ಠಾಣೆಯ ಮೆಟ್ಟಿಲು ಹತ್ತಿರುವ ವಿಷಯ ತಿಳಿದ ವಿಕೃತಕಾಮಿ ಯಾಸೀರ್ ತಲೆಮರೆಸಿಕೊಂಡಿರುವುದಾಗಿ ತಿಳಿದುಬಂದಿದೆ. ಈ ನಡುವೆ ಫೇಸ್ಬುಕ್ನಲ್ಲಿ ವಿದ್ಯಾರ್ಥಿನಿಯ ಹೆಸರು ಸಹಿತ ಹಾಕಿದ್ದ ಚಿತ್ರಗಳನ್ನು ಡಿಲೀಟ್ ಮಾಡಲಾಗಿದೆ.

Sunday, January 5, 2014